ಹಕ್ಕ-ಬುಕ್ಕ ಗೆ ಐಟಂ ಸಾಂಗ್
Posted date: 04 Wed, Apr 2012 ? 02:31:50 PM

ಲಲಿತ್‌ದೀಪ ಆರ್ಟ್ಸ್ ಲಾಂಛನದಲ್ಲಿ ಸಂತೋಷ್ ಬಂಡಾರಿ ಹಾಗೂ ಹೆಚ್.ಎಂ.ಕೃಷ್ಣ ನಿರ್ಮಿಸುತ್ತಿರುವ ಹಕ್ಕ-ಬುಕ್ಕ ಚಿತ್ರಕ್ಕೆ ಕಳೆದವಾರ ಕೆಂಗೇರಿ ಬಳಿ ಕಂಟ್ರಿಕ್ಲಬ್‌ನಲ್ಲಿ ಕುಣಿಸಿದೆ ಕುಣಿಸಿದೆ ರಮ್ ದಮ್ ಕುಣಿಸಿದೆ, ನಶೆಯಿದೆ ನಶೆಯಿದೆ ಮೈಯ್ಯೆಲ್ಲಾ ನಶೆಯಿದೆ, ಮಲ್ಯ ಒಮ್ಮೆ ಬಂದ ನನ್ನ ಮುಂದೆ ಕಿಂಗ್‌ಫಿಷರ್ ತಂದ ಕಣ್ಣ ಮುಂದೆ ಎಂಬ ಹಾಡಿನಲ್ಲಿ ಸ್ವೀಕೃತಿ, ರವಿಶಂಕರ್ ಹಾಗೂ ತಬಲ ನಾಣಿ ಪಾಲ್ಗೊಂಡಿದ್ದ ಈ ಹಾಡಿಗೆ ಕಂಬಿ ರಾಜು ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.  ಇದರೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
    ಯು.ಕೆ.ದಾಸ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನವೀನ್ ಸುವರ್ಣ ಛಾಯಾಗ್ರಹಣ, ಅಜನೀಶ್ ಸಂಗೀತ, ರಾಜಶೇಖರರಾವ್ ಚಿತ್ರಕಥೆ - ಸಂಭಾಷಣೆ, ಕವಿರಾಜ್, ಅಪ್ಪು ಸಾಹಿತ್ಯ, ಸಂತೋಷ್ ಬಂಡಾರಿ - ರಾಜಶೇಖರ್ ರಾವ್ ಕಥೆ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಕಂಬಿರಾಜು ನೃತ್ಯ, ವಿನೋದ ಮನೋಹರ್ ಸಂಕಲನವಿದೆ.  ತಾರಬಳಗದಲ್ಲಿ ರವಿಶಂಕರ್, ತಬಲಾನಾಣಿ, ರಾಧಿಕಾಗಾಂಧಿ, ಸತ್ಯಜಿತ್, ಅರವಿಂದ್, ಹೊನ್ನವಳ್ಳಿಕೃಷ್ಣ, ಜಯಶೀಲ, ಮೋಹನ ಜುನೇಜ, ರಮೇಶ್ ಅಭಿನಯಿಸುತ್ತಿದ್ದಾರೆ.
ಕಣ್ಣಂಚಲಿ ಇದೇ ತಿಂಗಳು ಬಿಡುಗಡೆ
ರಿಯಲ್ ರೀಲ್ ಅಂಡ್ ಯು ಫಿಲಂಸ್ ಲಾಂಛನದಲ್ಲಿ ವಿಜಯ್ ಭಾಸ್ಕರ್ ರೆಡ್ಡಿ, ಹೇಮಾವತಿ ನಿರ್ಮಿಸುತ್ತಿರುವ ಕಣ್ಣಂಚಲಿ ಚಿತ್ರವನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ರವಿಪೂಜಾರ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ದುರ್ಗಾಶಂಕರ್ ಛಾಯಾಗ್ರಹಣ, ಎಸ್.ನಾಗು ಸಂಗೀತ, ರಾಮ್ ನಾರಾಯಣ್ ಸಂಭಾಷಣೆ, ಪ್ರಕಾಶ್ ಸಂಕಲನ, ಸದಾ ರಾಘವನ್ ನೃತ್ಯ ನಿರ್ದೇಶನ, ಆನಂದಪ್ರಿಯ ರವಿಪೂಜಾರ್, ಶ್ರೀ ಹರ್ಷ, ಕೆ.ರಾಮನಾರಾಯಣ್ ಸಾಹಿತ್ಯವಿದೆ. ಅನಿಲ್ ಶ್ವೇತರಾವ್, ಶ್ರೀರಾಮ್, ವಿಶ್ವ, ರಮೇಶ್ ಭಟ್, ಎಂ.ಎಸ್.ಉಮೇಶ್, ಸತ್ಯಜಿತ್, ಶಶಿ, ಜ್ಯೋತಿ, ಗುರುರಾಜ್ ಕೊರ್ಡಿಕರ್, ನೆ.ಲ.ನರೇಂದ್ರಬಾಬು, ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed